ಬುಧವಾರ, ಸೆಪ್ಟೆಂಬರ್ 28, 2011

ಮನೆಗೆ ಬಂದವರು..!


ಎದೆಯೊಳಗೆ ಕುಳಿತರು
ಮನೆಯವರೆಗೆ ಬಂದರು
ಹೊಸ್ತಿಲಲ್ಲೆ ನಿಂತು ಮನೆಯ
ಅಸ್ತಿತ್ವವ ಅಳೆದರು.

ಹೊಸಿಲು ದಾಟಿ ಬಂದರು
ಮನೆಯ ತುಂಬಾ ನಡೆದರು
ಬಡಿಸಿಕೊಟ್ಟ ಅಡುಗೆಯಲ್ಲಿ
ನೂರು ತಪ್ಪು ಸುರಿದರು
ಕಲ್ಲು ಹೆಕ್ಕಿ ಹುಳಿಯ ಹಿಂಡಿ
ತಟ್ಟೆ ಮುಖಕೆ ಎಸೆದರು..

ಬಿಕ್ಕಳಿಕೆಯೇ ತುಂಬಿದೆ
ದುಃಖ್ಖ ಹೊದಿಕೆ ಹಾಸಿದೆ
ಹೋದವರಿಗೆ ಕಿಟಕಿ ತೆರೆದು
ಮನೆಯ ಕೋಣೆ ಕೊರಗಿದೆ
ಇದ್ದವರ ಬಿರುಗಾಳಿಗೆ
ಮನದ ದೀಪ ಬೆಚ್ಚಿದೆ

ಕರಗದಿರಲಿ ದೀಪರೂಪ
ಜಗದ ಬೆಂಕಿ ಕೋಪಕೆ
ಅಂಗಳದಲಿ  ಮಲ್ಲಿಗೆ
ಮನೆಯ ಒಳಗೂ ಚೆಲ್ಲಿದೆ
ಕೋಣೆ ತುಂಬಾ ದೀಪದಲ್ಲಿ
ನೂರು ಮನಸ್ಸು ಅರಳಿದೆ
ಬೊಗಸೆಯೊಡ್ಡಿ ಬೇಡುತ್ತಿದೆ
ಮನದ ಕಂಬನಿ ಮೆಲ್ಲಗೆ..!
-----------------------------------------------------------
-ರವಿ ಮೂರ್ನಾಡು

4 ಕಾಮೆಂಟ್‌ಗಳು:

  1. ರವಿ;ಸುಂದರ ಕವನ.ಇಷ್ಟವಾಯಿತು.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ
  2. entha saalugalu

    koneya pyaarada artha tumba ishta aayitu

    namagarivilladeye eshto vuaktigalu badukike bandu birugaali ebbisuttaare

    innu kelvaru saantvanada gaali beesuttaare

    hudukikolluvudu namge bittaddu allave?

    ಪ್ರತ್ಯುತ್ತರಅಳಿಸಿ
  3. ಕವನದ ಶೈಲಿಯಲ್ಲೇ ಮತ್ತು ಭಾವಗಳನ್ನು ಅರಳಿಸುವ ಸಿದ್ಧಿಯಲ್ಲೇ ನಿಮ್ಮ ದೈದೀಪ್ಯಮಾನತೆ ತೆರೆದುಕೊಳ್ಳುತ್ತದೆ.

    ಮನೆಯೆನ್ನುವ ಖಾಸಗೀ ಜಗತ್ತಿನಲ್ಲಿ ಪರಕೀಯ ಪ್ರವೇಶದ ಮತ್ತು ಅದರ ಸಂಭಾವ್ಯತೆಗಳು ಚೆನ್ನಾಗಿ ಮೂಡಿ ಬಂದಿವೆ.


    ವ್ಹಾವ್...

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ಪ್ರತ್ಯುತ್ತರಅಳಿಸಿ
  4. ರವಿ, ಮೊದಲ ಹೆಜ್ಜೆ ನಿಮ್ಮ ಭಾವನಾ ಪ್ರಪಂಚಕ್ಕೆ...ಬಹಳ ಸೊಗಸಾದ ಸಾಂಕೇತಿಕತೆ..ಮನೆಗೆ ಬಂದು, ಉಂಡವರ ಉಂಡಾಡಿತನ ಹಲವೊಮ್ಮೆ ರೋಸುತ್ತೆ ಮನ..ಅದೇ ಭಾವ ಎಂದುಕೊಳ್ಳಲೇ...??

    ಪ್ರತ್ಯುತ್ತರಅಳಿಸಿ